ವಿಸ್ಮಯ!

ಪರಮಾವಧಿ ಬಿಂದುವಿನ

ಕಾದೆಣ್ಣೆಗೆ ಬಿದ್ದರೂ
ಚೀಕಲು ಸಾಸಿವೆ
ಎಂದಿಗೂ ಸಿಡಿಯುವುದಿಲ್ಲ
ಬದಲಿಗೆ ಸುಟ್ಟು ಕರಕಲಾಗುತ್ತದಷ್ಟೇ!

ನಿಜ ಗರಿಷ್ಟ
ಕಾವಿಗೇರಿದ ನೀರು
ಕೊತಕೊತನೆ ಕುದಿಯುತ್ತದೆ
ಆದರೆ ಹಾಲು…
ಸದ್ದಿಲ್ಲದೇ ಉಕ್ಕುತ್ತದೆ!

ಒಲೆಯ ಮೇಲೆ
ಗಂಟೆಗಟ್ಟಲೆ ಕಾದ ಪಾತ್ರೆ
ಸುಡುತ್ತದೆನ್ನುವುದು
ಮುಟ್ಟಿ ನೋಡಿಯೇ
ತಿಳಿಯಬೇಕಿಲ್ಲ!

ನೆನಸಿ ಬಟ್ಟೆಯಲ್ಲಿ
ಕಟ್ಟಿ ಭಾರ ಹೇರಿಟ್ಟ
ಹೆಸರು ಕಾಳು
ಮೊಳಕೆಯೊಡೆಯುವುದು
ಉಸಿರು ಕಟ್ಟಿಸುವ ಕಾವಿಗೆ ಹೆದರಿ!

ಕೆಂಪಗೆ ಮಿರಮಿರ
ಮಿಂಚುವ ಮೆಣಸಿನಕಾಯಿಗೆ
ಕಾವು ಕೊಟ್ಟರಷ್ಟೇ
ಘಾಟುಕ್ಕಿಸುವ ಹುಮ್ಮಸ್ಸು
ಪುಟಿದೇಳುವುದು.

ಕಾವಿನ ಕುರಿತ
ಎಲ್ಲ ತರ್ಕ
ಸೀಮಿತ ಚೌಕಟ್ಟಿನೊಳಗಿನ
ಗಿರಕಿ
ಹೊಳೆಯುತ್ತವೆ ತಾರೆಗಳು
ತೆರೆದಷ್ಟೂ ಕಿಟಕಿ
ಕಾವು…
ವ್ಯಾಖ್ಯೆಗೆ ಸಿಗಲಾರದ್ದು
ಮಿತಿಗಳೊಳಗೆ ಬರಲಾರದ್ದು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಖರ್ಗೆಯೇ ಕೂಗಾಡ್ಲಿ ಸಿದ್ದುವೇ ಹೋರಾಡ್ಲಿ ಸಿ‌ಎಂ ನೆಮ್ಮದಿಗೆ ಭಂಗವಿಲ್ಲ…!
Next post ಎಲ್ಲಿ ಜಾರಿತೋ ಮನವು…

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

cheap jordans|wholesale air max|wholesale jordans|wholesale jewelry|wholesale jerseys